ಕನ್ನಡ ಗಾದೆ – ಅರ್ಥ- ವಿವರಣೆ – ವಿಸ್ತರಣೆ – ತಾತ್ಪರ್ಯ (Gade – Kannada Proverb – Artha – Vivarane – Vistharane – Tatparya – Meaning – Explanation in Kannada)
5. ಭರಣಿ ಮಳೆ ಧರಣಿ ಬೆಳೆ (Bharani male dharani bele)
ಭರಣಿ ಮಳೆ, ಧರಣಿ ಬೆಳೆ. ಭರಣಿ ಮಳೆ ಬಂದಾಗ ಬಿತ್ತನೆ ಮಾಡಿದರೆ ಒಳ್ಳೆ ಫಸಲು ಬರುವುದು ಖಂಡಿತ.
ಇದು ರೈತರ ನಂಬಿಕೆ. ಒಳ್ಳೆ ಫಸಲು ಬರುವುದು ಖಂಡಿತ ಎಂದು ರೈತರ ನಂಬಿಕೆ. ರೈತರು ಭರಣಿ ಮಳೆ ಬರುವುದನ್ನೇ ಕಾಯುತ್ತ, ಬಂದ ಕೂಡಲೇ ಮುಂಗಾರು ಮಳೆಗೆ ಬೀಜ ಬಿತ್ತಲು ಸಿದ್ಧತೆ ಮಾಡಿಕೊಂಡಿರುತ್ತಾರೆ.
ಈ ಗಾದೆಯು ರೈತರಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟಿರುತ್ತದೆ. ಇದು “ಭರಣಿ ಮಳೆ, ಧರಣಿ ಬೆಳೆ” ಎಂಬ ಗಾದೆಯ ಅರ್ಥ.